ಮಜಾವಾಣಿ: ರಾಜ್ಯ ಸುದ್ದಿ
ನೈಸರ್ಗಿಕ ಕಾರಣಗಳಿಂದ ರೈತನ ಸಾವು!
ಮು.ಮಂ. ನೆಮ್ಮದಿಯ ನಿಟ್ಟುಸಿರು
ಬೆಂಗಳೂರು, ಸೆಪ್ಟೆಂಬರ್ ೩೧: ಹಲವು ವರ್ಷಗಳ ನಂತರ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ, ರೈತರೊಬ್ಬರು ನೈಸರ್ಗಿಕ ಕಾರಣಗಳಿಂದ ಸಾವಿಗೆ ಈಡಾಗಿರುವುದು ವರದಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಗುಳೇದ ಗುಡ್ಡ ಗ್ರಾಮದ ಶಿವನಂಜಯ್ಯನವರೇ ಈ ಅದೃಷ್ಟಶಾಲಿ ರೈತರಾಗಿದ್ದು, ಅವರಿಗೆ ೯೮ ವರ್ಷ ವಯಸ್ಸಾಗಿತ್ತು. ವೃತ್ತಿಯಿಂದ ರೈತರಾದರೂ, ನೈಸರ್ಗಿಕ ಕಾರಣಗಳಿಂದ ಅವರು ಸಾವಿಗೀಡಾಗಿರುವುದು ಇಡೀ ಜಿಲ್ಲೆಯಲ್ಲಿ ಆಶ್ಚರ್ಯವನ್ನುಂಟು ಮಾಡಿದ್ದು, ಗುಳೇದ ಗುಡ್ಡದ ಗ್ರಾಮಸ್ತರನ್ನು ಆನಂದತುಂದಿಲರನ್ನಾಗಿಸಿದೆ. ನಮ್ಮ ಪತ್ರಿಕೆಯೊಂದಿಗೆ ಈ ವಿಷಯದ ಕುರಿತು ಮಾತನಾಡಿದ ಮತ್ತೊಬ್ಬ ರೈತ ಚಿಕ್ಕೇಗೌಡ, "ಶಿವನಂಜಯ್ಯ ಹೋಗ್ಬಿಟ್ಟರು ಅಂತ ಗೊತ್ತಾದಾಗ, ಅದೇ ಎಂದಿನಂತೆ ಅಂದುಕೊಂಡೆ. ಆದರೆ, ಅವರು ವಯಸ್ಸಾಗಿ ತೀರಿಕೊಂಡದ್ದು ಅಂತ ಗೊತ್ತಾದಾಗ, ನಿಜವಾಗ್ಲೂ ಆಶ್ಚರ್ಯ ಆಯಿತು. ಈ ಕಾಲದಲ್ಲೂ ಈ ತರ ಸಾವು ಇದೆಯಾ ಅಂತ!" ಎಂದರು.
ಶಿವನಂಜಯ್ಯನವರ ಈ ಸಾವು ಸರ್ಕಾರಿ ವಲಯಗಳಲ್ಲಿ ಕೊಂಚ ಮಟ್ಟಿಗೆ ಆನಂದವನ್ನು ತಂದಿದ್ದು, ಮುಖ್ಯಮಂತ್ರಿಯವರು ಸಹ ರೈತರ ಸಾವಿನ ವಿಚಾರದಲ್ಲಿ ಇದೇ ಮೊದಲ ಬಾರಿಗೆ ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟರೆನ್ನಲಾಗಿದೆ.
ಖರ್ಗೆ ಆಗ್ರಹ: ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರತಿ ವ್ಯಕ್ತಿಯ ಹಿನ್ನೆಲೆಯನ್ನು ಪರಿಶೀಲಿಸಿ, ಆತ ಅಥವಾ ಆಕೆ ರೈತ ಇರಬಹುದೇ ಎಂಬುದನ್ನು ಖಚಿತ ಪಡಿಸಿಕೊಳ್ಳುವಂತೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ನಿಧನರಾದವರು ರೈತರಲ್ಲ ಎಂಬುದು ಖಚಿತವಾಗಿ ನಿರೂಪಿತವಾಗದ ತನಕ, ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲಾ ರೈತರೆಂದೇ ಪರಿಗಣಿಸ ಬೇಕೆಂದ ಖರ್ಗೆಯವರು, ಇದಕ್ಕಾಗಿ ಸೂಕ್ತ ಕಾನೂನುಗಳನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮು.ಮಂ. ನೆಮ್ಮದಿಯ ನಿಟ್ಟುಸಿರು
ಬೆಂಗಳೂರು, ಸೆಪ್ಟೆಂಬರ್ ೩೧: ಹಲವು ವರ್ಷಗಳ ನಂತರ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ, ರೈತರೊಬ್ಬರು ನೈಸರ್ಗಿಕ ಕಾರಣಗಳಿಂದ ಸಾವಿಗೆ ಈಡಾಗಿರುವುದು ವರದಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಗುಳೇದ ಗುಡ್ಡ ಗ್ರಾಮದ ಶಿವನಂಜಯ್ಯನವರೇ ಈ ಅದೃಷ್ಟಶಾಲಿ ರೈತರಾಗಿದ್ದು, ಅವರಿಗೆ ೯೮ ವರ್ಷ ವಯಸ್ಸಾಗಿತ್ತು. ವೃತ್ತಿಯಿಂದ ರೈತರಾದರೂ, ನೈಸರ್ಗಿಕ ಕಾರಣಗಳಿಂದ ಅವರು ಸಾವಿಗೀಡಾಗಿರುವುದು ಇಡೀ ಜಿಲ್ಲೆಯಲ್ಲಿ ಆಶ್ಚರ್ಯವನ್ನುಂಟು ಮಾಡಿದ್ದು, ಗುಳೇದ ಗುಡ್ಡದ ಗ್ರಾಮಸ್ತರನ್ನು ಆನಂದತುಂದಿಲರನ್ನಾಗಿಸಿದೆ. ನಮ್ಮ ಪತ್ರಿಕೆಯೊಂದಿಗೆ ಈ ವಿಷಯದ ಕುರಿತು ಮಾತನಾಡಿದ ಮತ್ತೊಬ್ಬ ರೈತ ಚಿಕ್ಕೇಗೌಡ, "ಶಿವನಂಜಯ್ಯ ಹೋಗ್ಬಿಟ್ಟರು ಅಂತ ಗೊತ್ತಾದಾಗ, ಅದೇ ಎಂದಿನಂತೆ ಅಂದುಕೊಂಡೆ. ಆದರೆ, ಅವರು ವಯಸ್ಸಾಗಿ ತೀರಿಕೊಂಡದ್ದು ಅಂತ ಗೊತ್ತಾದಾಗ, ನಿಜವಾಗ್ಲೂ ಆಶ್ಚರ್ಯ ಆಯಿತು. ಈ ಕಾಲದಲ್ಲೂ ಈ ತರ ಸಾವು ಇದೆಯಾ ಅಂತ!" ಎಂದರು.
ಶಿವನಂಜಯ್ಯನವರ ಈ ಸಾವು ಸರ್ಕಾರಿ ವಲಯಗಳಲ್ಲಿ ಕೊಂಚ ಮಟ್ಟಿಗೆ ಆನಂದವನ್ನು ತಂದಿದ್ದು, ಮುಖ್ಯಮಂತ್ರಿಯವರು ಸಹ ರೈತರ ಸಾವಿನ ವಿಚಾರದಲ್ಲಿ ಇದೇ ಮೊದಲ ಬಾರಿಗೆ ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟರೆನ್ನಲಾಗಿದೆ.
ಖರ್ಗೆ ಆಗ್ರಹ: ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರತಿ ವ್ಯಕ್ತಿಯ ಹಿನ್ನೆಲೆಯನ್ನು ಪರಿಶೀಲಿಸಿ, ಆತ ಅಥವಾ ಆಕೆ ರೈತ ಇರಬಹುದೇ ಎಂಬುದನ್ನು ಖಚಿತ ಪಡಿಸಿಕೊಳ್ಳುವಂತೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ನಿಧನರಾದವರು ರೈತರಲ್ಲ ಎಂಬುದು ಖಚಿತವಾಗಿ ನಿರೂಪಿತವಾಗದ ತನಕ, ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲಾ ರೈತರೆಂದೇ ಪರಿಗಣಿಸ ಬೇಕೆಂದ ಖರ್ಗೆಯವರು, ಇದಕ್ಕಾಗಿ ಸೂಕ್ತ ಕಾನೂನುಗಳನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.


6 Comments:
thank you for sharing
info@izmirevdenevetasima.net
thank you
bilgi@ozmarmaralpg.com
thanks..
bilgi@mousepadhouse.com
super,,,,,,,,,,,,
from
http://shivagadag.blogspot.com
Thanks You...
kol saati
Thanks You...
golf packages in turkeyThanks You...
bursa evden eveThanks You...
dinleme cihazıThanks You...
indirimli alış verişThanks You...
kol saatiThanks You...
mario oyunları
Post a Comment
Links to this post:
Create a Link
<< Home