ಮಜಾವಾಣಿ: ಪ್ರಾದೇಶಿಕ ವಾರ್ತೆ
ಇನ್ನು ಮುಂದೆ ಅಣು "ಮುಂಬ್"?!
ಮುಂಬೈ, ಏಪ್ರಿಲ್ ೩೧: ಬಾಂಬೆ ಡೈಯಿಂಗ್, ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಸೇರಿಸಿ, "ಬಾಂಬೆ" ಎಂದು ಹೆಸರಿರುವ ಪ್ರತಿಯೊಂದು ಸಂಘ ಸಂಸ್ಥೆಯೂ ಅದನ್ನು "ಮುಂಬೈ"ಗೆ ಬದಲಿಸ ಬೇಕೆಂದು ಶಿವಸೇನಾ ಮುಖ್ಯಸ್ತ ಬಾಳ್ ಠಾಕ್ರೆ ಎಚ್ಚರಿಕೆ ನೀಡಿರುವ ಬೆನ್ನಲ್ಲೇ, ಅಣು ಬಾಂಬನ್ನು ಅಣು "ಮುಂಬ್" ಎಂದು ಕರೆಯುವಂತೆ ಕೂಗೆದ್ದಿದೆ.
ಸ್ವಾಭಿಮಾನಿ ಮಹರಾಷ್ಟ್ರ ಸಂಘದ ಕಾರ್ಯಕರ್ತರು ಅಣು ಬಾಂಬಿನ ಮರು ನಾಮಕರಣಕ್ಕೆ ಒತ್ತಾಯಿಸಿ ಗುರುವಾರ ಸಂಜೆ ಮುಂಬೈನಲ್ಲೆ ಭಾರಿ ಪ್ರದರ್ಶನವನ್ನು ಏರ್ಪಡಿಸಿದ್ದರು. ಸಂಘದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಅತುಲ್ ರಾವ್ ಪಾಟೆಕರ್, "ಅಣು ಬಾಂಬ್ ಭಾರತದ ವೈಜ್ಞಾನಿಕ ಪ್ರಗತಿಯ ಸಂಕೇತ. ಈಗಾಗಲೇ ಬಾಂಬೇ ಮುಂಬೈ ಆಗಿರುವುದರಿಂದ, ಬಾಂಬ್ ಸಹ ಮುಂಬ್ ಆಗಲೇ ಬೇಕು. ಇದಕ್ಕಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧ" ಎಂದು ನುಡಿದರು.
(ಪಿ.ಟಿ.ಹೈ.)
ಮುಂಬೈ, ಏಪ್ರಿಲ್ ೩೧: ಬಾಂಬೆ ಡೈಯಿಂಗ್, ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಸೇರಿಸಿ, "ಬಾಂಬೆ" ಎಂದು ಹೆಸರಿರುವ ಪ್ರತಿಯೊಂದು ಸಂಘ ಸಂಸ್ಥೆಯೂ ಅದನ್ನು "ಮುಂಬೈ"ಗೆ ಬದಲಿಸ ಬೇಕೆಂದು ಶಿವಸೇನಾ ಮುಖ್ಯಸ್ತ ಬಾಳ್ ಠಾಕ್ರೆ ಎಚ್ಚರಿಕೆ ನೀಡಿರುವ ಬೆನ್ನಲ್ಲೇ, ಅಣು ಬಾಂಬನ್ನು ಅಣು "ಮುಂಬ್" ಎಂದು ಕರೆಯುವಂತೆ ಕೂಗೆದ್ದಿದೆ.ಸ್ವಾಭಿಮಾನಿ ಮಹರಾಷ್ಟ್ರ ಸಂಘದ ಕಾರ್ಯಕರ್ತರು ಅಣು ಬಾಂಬಿನ ಮರು ನಾಮಕರಣಕ್ಕೆ ಒತ್ತಾಯಿಸಿ ಗುರುವಾರ ಸಂಜೆ ಮುಂಬೈನಲ್ಲೆ ಭಾರಿ ಪ್ರದರ್ಶನವನ್ನು ಏರ್ಪಡಿಸಿದ್ದರು. ಸಂಘದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಅತುಲ್ ರಾವ್ ಪಾಟೆಕರ್, "ಅಣು ಬಾಂಬ್ ಭಾರತದ ವೈಜ್ಞಾನಿಕ ಪ್ರಗತಿಯ ಸಂಕೇತ. ಈಗಾಗಲೇ ಬಾಂಬೇ ಮುಂಬೈ ಆಗಿರುವುದರಿಂದ, ಬಾಂಬ್ ಸಹ ಮುಂಬ್ ಆಗಲೇ ಬೇಕು. ಇದಕ್ಕಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧ" ಎಂದು ನುಡಿದರು.
(ಪಿ.ಟಿ.ಹೈ.)
Labels: ರಾಜಕೀಯ


0 Comments:
Post a Comment
Links to this post:
Create a Link
<< Home