ಮಜಾವಾಣಿ: ಪಾಶವೀ ಪ್ರೇಮ
"ಎಂಜಲೆಲೆಯಲ್ಲಿ ಆರೋಗ್ಯಕರ ಆಹಾರ ಇರಲಿ" - ಮನೇಕಾ
ನವದೆಹಲಿ, ಮಾರ್ಚ್ ೧೭: ಊಟದ ನಂತರ ಎಂಜಲೆಲೆಗಳ ಜೊತೆಗೆ ಕೊಬ್ಬಿನಂಶ ತುಂಬಿದ ಆನಾರೋಗ್ಯಕರ ಆಹಾರ ಪದಾರ್ಥಗಳನ್ನೂ ಜನರು ಬೀದಿಗೆ ಬಿಸಾಡುತ್ತಿರುವ ಬಗೆಗೆ ಮಾಜಿ ಸಚಿವೆ ಮನೇಕಾ ಗಾಂಧಿ ಕಳವಳ ವ್ಯಕ್ತ ಪಡಿಸಿದ್ದಾರೆ.
ನವದೆಹಲಿಯಲ್ಲಿ ಏರ್ಪಡಿಸಿದ್ದ "ಪ್ರಾಣಿಗಳು ಮತ್ತು ಸಂವಿಧಾನ" ಜಾಗತಿಕ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, "ಕೊಬ್ಬು ಮತ್ತು ಸಿಹಿಯ ಪದಾರ್ಥಗಳನ್ನು ತಿನ್ನ ಬೇಕೆಂದಿದ್ದರೆ, ಅದು ನಿಮ್ಮಿಷ್ಟ. ಆದರೆ, ಅವುಗಳನ್ನು ಎಂಜಲೆಲೆಯ ಜೊತೆಗೆ ಬೀದಿಗೆ ಬಿಸಾಡಿದಾಗ ಬೀದಿ ನಾಯಿಗಳ ಆರೋಗ್ಯ ಹದಗೆಡುವುದರಲ್ಲಿ ಸಂದೇಹವೇ ಇಲ್ಲ. ಇತ್ತೀಚೆಗೆ ನಡೆದ ಒಂದು ಸಮೀಕ್ಷೆಯ ಪ್ರಕಾರ, ಬೀದಿ ನಾಯಿಗಳ ತೂಕ ಹೆಚ್ಚಾಗುತ್ತಿದ್ದು, ಅವು ರಕ್ತದೊತ್ತಡ ಮತ್ತು ಡಯಾಬಿಟಿಸ್ ನಂತಹ ರೋಗಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಜಿಲೇಬಿ, ಜಾಮೂನ್, ಬೋಂಡಾ ಬೇಕಿದ್ದರೆ ನೀವು ತಿನ್ನಿ, ಆದರೆ ಎಂಜಲೆಲೆಯಲ್ಲಿ ಮಾತ್ರ ಕೊಬ್ಬಿನ ಅಂಶ ಕಡಿಮೆ ಇರುವ, ಫೈಬರ್ ಹೆಚ್ಚಿರುವ ತಾಜಾ ಆಹಾರ ಪದಾರ್ಥಗಳನ್ನೇ ಬಿಸಾಡಿ" ಎಂದು ಕರೆಯಿತ್ತರು.
(ಪಿ.ಟಿ.ಹೈ.) (ಚಿತ್ರ ಕೃಪೆ: ಟ್ರಿಬ್ಯೂನ್)
ನವದೆಹಲಿ, ಮಾರ್ಚ್ ೧೭: ಊಟದ ನಂತರ ಎಂಜಲೆಲೆಗಳ ಜೊತೆಗೆ ಕೊಬ್ಬಿನಂಶ ತುಂಬಿದ ಆನಾರೋಗ್ಯಕರ ಆಹಾರ ಪದಾರ್ಥಗಳನ್ನೂ ಜನರು ಬೀದಿಗೆ ಬಿಸಾಡುತ್ತಿರುವ ಬಗೆಗೆ ಮಾಜಿ ಸಚಿವೆ ಮನೇಕಾ ಗಾಂಧಿ ಕಳವಳ ವ್ಯಕ್ತ ಪಡಿಸಿದ್ದಾರೆ.ನವದೆಹಲಿಯಲ್ಲಿ ಏರ್ಪಡಿಸಿದ್ದ "ಪ್ರಾಣಿಗಳು ಮತ್ತು ಸಂವಿಧಾನ" ಜಾಗತಿಕ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, "ಕೊಬ್ಬು ಮತ್ತು ಸಿಹಿಯ ಪದಾರ್ಥಗಳನ್ನು ತಿನ್ನ ಬೇಕೆಂದಿದ್ದರೆ, ಅದು ನಿಮ್ಮಿಷ್ಟ. ಆದರೆ, ಅವುಗಳನ್ನು ಎಂಜಲೆಲೆಯ ಜೊತೆಗೆ ಬೀದಿಗೆ ಬಿಸಾಡಿದಾಗ ಬೀದಿ ನಾಯಿಗಳ ಆರೋಗ್ಯ ಹದಗೆಡುವುದರಲ್ಲಿ ಸಂದೇಹವೇ ಇಲ್ಲ. ಇತ್ತೀಚೆಗೆ ನಡೆದ ಒಂದು ಸಮೀಕ್ಷೆಯ ಪ್ರಕಾರ, ಬೀದಿ ನಾಯಿಗಳ ತೂಕ ಹೆಚ್ಚಾಗುತ್ತಿದ್ದು, ಅವು ರಕ್ತದೊತ್ತಡ ಮತ್ತು ಡಯಾಬಿಟಿಸ್ ನಂತಹ ರೋಗಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಜಿಲೇಬಿ, ಜಾಮೂನ್, ಬೋಂಡಾ ಬೇಕಿದ್ದರೆ ನೀವು ತಿನ್ನಿ, ಆದರೆ ಎಂಜಲೆಲೆಯಲ್ಲಿ ಮಾತ್ರ ಕೊಬ್ಬಿನ ಅಂಶ ಕಡಿಮೆ ಇರುವ, ಫೈಬರ್ ಹೆಚ್ಚಿರುವ ತಾಜಾ ಆಹಾರ ಪದಾರ್ಥಗಳನ್ನೇ ಬಿಸಾಡಿ" ಎಂದು ಕರೆಯಿತ್ತರು.
(ಪಿ.ಟಿ.ಹೈ.) (ಚಿತ್ರ ಕೃಪೆ: ಟ್ರಿಬ್ಯೂನ್)
Labels: ಪಾಶವೀ ಪ್ರೇಮ


2 Comments:
nice to see a new post after 3 months
Dear Shrinidhi,
Thanks!
It's great to know that there's at least one reader!
..
V.V,
Post a Comment
Links to this post:
Create a Link
<< Home