ಮಜಾವಾಣಿ: ರಾಜಕೀಯ - ಕೃಷಿ
ಸೆಪ್ಟೆಂಬರ್ ನಂತರ ಮತ್ತೆ ಜೂನ್ - ಮು.ಮಂ.
ಬೆಂಗಳೂರು, ಆಗಸ್ಟ್ ೧೬: ಈ ವರ್ಷದ ಜೂನ್ ತಿಂಗಳಲ್ಲಿ ರಾಜ್ಯಾದ್ಯಂತ ಸಾಕಷ್ಟು ಮಳೆ ಆಗದ್ದರಿಂದ ಜೂನ್ ತಿಂಗಳನ್ನು ಸೆಪ್ಟೆಂಬರ್ ನಂತರ ಮತ್ತೆ ಮರುಕಳಿಸಲು ಕರ್ನಾಟಕ ಸರ್ಕಾರ ನಿರ್ಧರಿಸುತ್ತಿದೆ ಎಂದು ತಿಳಿದು ಬಂದಿದೆ.
ಹವಾಮಾನ ವೀಕ್ಷಾಣಾಲಯದ ತಜ್ಞರ ಪ್ರಕಾರ ಜೂನ್ ತಿಂಗಳಿನಲ್ಲಿ ಮುಂಗಾರು ಮಳೆಯ ಪ್ರಮಾಣ ಎಂದಿಗಿಂತ ೧೫ ಮಿ.ಮಿ. ಕಡಿಮೆ ಬಿದ್ದಿದ್ದು ಮಳೆಯನ್ನೇ ಅವಲಂಬಿಸಿರುವ ಕೃಷಿಕರಿಗೆ ಅಪಾರ ನಷ್ಟ ಉಂಟಾಗುವ ಸಂದರ್ಭ ಎದುರಾಗಿದೆ. ರೈತರ ಆತ್ಮಹತ್ಯೆಯ ವಿರುದ್ಧ ಸಮರ ಸಾರಿರುವ ಮುಖ್ಯ ಮಂತ್ರಿ ಕುಮಾರ ಸ್ವಾಮಿ, ಈ ಎರಡನೆಯ ಜೂನಿನಲ್ಲಿ ಎಲ್ಲೆಡೆ ತಾವೇ ಸ್ವತಃ ಖುದ್ದಾಗಿ ನಿಂತು ಸಾಕಷ್ಟು ಮಳೆ ಹುಯ್ಯಿಸುವ ಭರವಸೆ ಇತ್ತಿದ್ದಾರೆ. ಇದಕ್ಕಾಗಿ, ಈ ವರ್ಷದ ದ್ವಿತೀಯ ಜೂನಿನಲ್ಲಿ ರಾಜ್ಯದ ಪ್ರತಿಯೊಂದು ಗ್ರಾಮದಲ್ಲೂ ವಾಸ್ತವ್ಯಮಾಡಲಿದ್ದು, ವಾಸ್ತವ್ಯ ಮಾಡುವ ಪ್ರತಿ ಗ್ರಾಮದಲ್ಲೂ ಕನಿಷ್ಠ ೨೫ ಮಿ.ಮಿ. ಮಳೆ ಹುಯ್ಯಿಸುವ ಪಣ ತೊಟ್ಟಿದ್ದಾರೆ.
ಯಡ್ಡಿಗೆ ಆತಂಕ: ಸೆಪ್ಟೆಂಬರ್ ನಂತರ ಜೂನ್ ತಿಂಗಳನ್ನು ಮತ್ತೆ ಮರುಕಳಿಸುತ್ತಿರುವುದು ಉಪ ಮುಖ್ಯಮಂತ್ರಿ ಯಡೆಯೂರಪ್ಪನವರಿಗೆ ಆತಂಕ ಉಂಟುಮಾಡಿದೆ ಎನ್ನಲಾಗಿದೆ. ಈ ಕುರಿತು ತಮ್ಮ ಖೇದವನ್ನು ಅವರು ತಮ್ಮ ಆತ್ಮೀಯರೊಂದಿಗೆ ಹಂಚಿಕೊಂಡಿದ್ದಾರೆ ಎನ್ನಲಾಗಿದ್ದು, "ನಾನೇನೂ ರೈತ ವಿರೋಧಿ ಅಲ್ಲ. ಮುಂಗಾರು ಮಳೆ ವಿರೋಧಿಯೂ ಅಲ್ಲ. ಜೂನ್ ತಿಂಗಳನ್ನು ಮರುಕಳಿಸುವುದಕ್ಕೆ ನನ್ನ ವಿರೋಧ ಏನೂ ಇಲ್ಲ. ಆದರೆ, ಇದರಲ್ಲಿ ಆತುರ ಯಾಕೆ? ಸೆಪ್ಟೆಂಬರ್ ಆದ ತಕ್ಷಣ ಜೂನ್ ವಾಪಸ್ ತರುತ್ತಿರುವುದು ಯಾಕೋ ಸಂಶಯಾಸ್ಪದವಾಗಿದೆ" ಎಂದಿದ್ದಾರೆ ಎನ್ನಲಾಗಿದೆ.
ಬೆಂಗಳೂರು, ಆಗಸ್ಟ್ ೧೬: ಈ ವರ್ಷದ ಜೂನ್ ತಿಂಗಳಲ್ಲಿ ರಾಜ್ಯಾದ್ಯಂತ ಸಾಕಷ್ಟು ಮಳೆ ಆಗದ್ದರಿಂದ ಜೂನ್ ತಿಂಗಳನ್ನು ಸೆಪ್ಟೆಂಬರ್ ನಂತರ ಮತ್ತೆ ಮರುಕಳಿಸಲು ಕರ್ನಾಟಕ ಸರ್ಕಾರ ನಿರ್ಧರಿಸುತ್ತಿದೆ ಎಂದು ತಿಳಿದು ಬಂದಿದೆ.
ಹವಾಮಾನ ವೀಕ್ಷಾಣಾಲಯದ ತಜ್ಞರ ಪ್ರಕಾರ ಜೂನ್ ತಿಂಗಳಿನಲ್ಲಿ ಮುಂಗಾರು ಮಳೆಯ ಪ್ರಮಾಣ ಎಂದಿಗಿಂತ ೧೫ ಮಿ.ಮಿ. ಕಡಿಮೆ ಬಿದ್ದಿದ್ದು ಮಳೆಯನ್ನೇ ಅವಲಂಬಿಸಿರುವ ಕೃಷಿಕರಿಗೆ ಅಪಾರ ನಷ್ಟ ಉಂಟಾಗುವ ಸಂದರ್ಭ ಎದುರಾಗಿದೆ. ರೈತರ ಆತ್ಮಹತ್ಯೆಯ ವಿರುದ್ಧ ಸಮರ ಸಾರಿರುವ ಮುಖ್ಯ ಮಂತ್ರಿ ಕುಮಾರ ಸ್ವಾಮಿ, ಈ ಎರಡನೆಯ ಜೂನಿನಲ್ಲಿ ಎಲ್ಲೆಡೆ ತಾವೇ ಸ್ವತಃ ಖುದ್ದಾಗಿ ನಿಂತು ಸಾಕಷ್ಟು ಮಳೆ ಹುಯ್ಯಿಸುವ ಭರವಸೆ ಇತ್ತಿದ್ದಾರೆ. ಇದಕ್ಕಾಗಿ, ಈ ವರ್ಷದ ದ್ವಿತೀಯ ಜೂನಿನಲ್ಲಿ ರಾಜ್ಯದ ಪ್ರತಿಯೊಂದು ಗ್ರಾಮದಲ್ಲೂ ವಾಸ್ತವ್ಯಮಾಡಲಿದ್ದು, ವಾಸ್ತವ್ಯ ಮಾಡುವ ಪ್ರತಿ ಗ್ರಾಮದಲ್ಲೂ ಕನಿಷ್ಠ ೨೫ ಮಿ.ಮಿ. ಮಳೆ ಹುಯ್ಯಿಸುವ ಪಣ ತೊಟ್ಟಿದ್ದಾರೆ.
ಯಡ್ಡಿಗೆ ಆತಂಕ: ಸೆಪ್ಟೆಂಬರ್ ನಂತರ ಜೂನ್ ತಿಂಗಳನ್ನು ಮತ್ತೆ ಮರುಕಳಿಸುತ್ತಿರುವುದು ಉಪ ಮುಖ್ಯಮಂತ್ರಿ ಯಡೆಯೂರಪ್ಪನವರಿಗೆ ಆತಂಕ ಉಂಟುಮಾಡಿದೆ ಎನ್ನಲಾಗಿದೆ. ಈ ಕುರಿತು ತಮ್ಮ ಖೇದವನ್ನು ಅವರು ತಮ್ಮ ಆತ್ಮೀಯರೊಂದಿಗೆ ಹಂಚಿಕೊಂಡಿದ್ದಾರೆ ಎನ್ನಲಾಗಿದ್ದು, "ನಾನೇನೂ ರೈತ ವಿರೋಧಿ ಅಲ್ಲ. ಮುಂಗಾರು ಮಳೆ ವಿರೋಧಿಯೂ ಅಲ್ಲ. ಜೂನ್ ತಿಂಗಳನ್ನು ಮರುಕಳಿಸುವುದಕ್ಕೆ ನನ್ನ ವಿರೋಧ ಏನೂ ಇಲ್ಲ. ಆದರೆ, ಇದರಲ್ಲಿ ಆತುರ ಯಾಕೆ? ಸೆಪ್ಟೆಂಬರ್ ಆದ ತಕ್ಷಣ ಜೂನ್ ವಾಪಸ್ ತರುತ್ತಿರುವುದು ಯಾಕೋ ಸಂಶಯಾಸ್ಪದವಾಗಿದೆ" ಎಂದಿದ್ದಾರೆ ಎನ್ನಲಾಗಿದೆ.


2 Comments:
ಮಳೆ ಟಿವಿಯಲ್ಲೂ ಹುಯ್ಯಿಸುವ ಕೆಲಸ ನಡೆದಿದೆಯಂತೆ. ಸೆಪ್ಟೆಂಬರ್ ಬರೋದರೊಳಗೆ ಟಿವಿ ಚ್ಯಾನಲ್ಲು ಮುಂಗಾರು ಕಾಣುವಂತೆ ಸಕಲ ಸಿದ್ಧತೆಗಳೂ ನಡೆದಿವೆಯಂತೆ.
ಯಡ್ಡಿಗೆ ಆತಂಕಗಳ ಸುರಿಮಳೆ ಮುಂದೆ ಇನ್ನೂ ಕಾದಿದೆ.
Dear Lord Voldemort,
We at Majavani World H.Q. appreciate the information that you provided.
We have no doubt our Dear Leader will personally ensure that adequate rain falls in each every corner of Karnataka. He is the best. If that's cause of concern to our Dear Deputy Leader, so be it!
Regards,
"V.V."
Post a Comment
Links to this post:
Create a Link
<< Home