ಮಜಾವಾಣಿ: ತಿದ್ದುಪುಡಿ
ಪ್ರಜಾವಾಣಿ ತಿದ್ದುಪಡಿ
ಕನ್ನಡದ ಖ್ಯಾತ ಸುದ್ದಿಪತ್ರಿಕೆ ಪ್ರಜಾವಾಣಿ ಶಿಲ್ಪಾ ಶೆಟ್ಟಿಯವರ ರಿಯಾಲಿಟಿ ಷೋ ಕುರಿತು ಒಂದು ಸಂಪಾದಕೀಯವನ್ನು ಪ್ರಕಟಿಸಿತ್ತು. ಮುದ್ರಣ ದೋಷದಿಂದಾಗಿ ಆ ಸಂಪಾದಕೀಯದಲ್ಲಿ ಹಲವಾರು ತಪ್ಪುಗಳಿದ್ದು ಪ್ರಜಾವಾಣಿ ಪತ್ರಿಕೆ ಓದುಗರ ನಗೆಪಾಟಲಿಗೀಡಾಗಿದ್ದಷ್ಟೇ ಅಲ್ಲದೇ ಮರುದಿನ ತಿದ್ದುಪಡಿಯೊಂದನ್ನು ಪ್ರಕಟಿಸಬೇಕಾಯಿತು. ಆದನ್ನು ಯಥಾವತ್ತಾಗಿಡಲಾಗಿದೆ:
- ಶಿಲ್ಪಾ ಶೆಟ್ಟಿ ಭಾಗವಹಿಸಿದ ಟಿ.ವಿ. ಕಾರ್ಯಕ್ರಮದ ಹೆಸರು ಬಿಗ್ ಬ್ರದರ್; ಬಿಗ್ ಬಾದರ್ ಅಲ್ಲ.
- ಶಿಲ್ಪಾ ಶೆಟ್ಟಿಯನ್ನು ನಿಂದಿಸಿದವಳು ಜೇಡ್ ಗೂಡಿ; ಜೇನು ಗೂಡಿಯಲ್ಲ.
- ಜೇಡ್ ಗೂಡಿಯ ನಿಂದನೆಯಿಂದ ನೋವು ಉಂಟಾಗಿದ್ದು ಭಾರತೀಯ ಜನಾಂಗಕ್ಕೆ; ಭಾರತೀಯ
ಜನನಾಂಗಕ್ಕಲ್ಲ.- ಜೇಡ್ ಗೂಡಿಯನ್ನು ಭಾರತಕ್ಕೆ ಆಹ್ವಾನಿಸಿರುವುದು ಭಾರತೀಯ ಪ್ರವಾಸೋದ್ಯಮ ಇಲಾಖೆ; ಪ್ರಸವೋದ್ಯಮ ಇಲಾಖೆಯಲ್ಲ.
- ಕಡೆಯದಾಗಿ ಆಕೆಯನ್ನು ಆಹ್ವಾನಿಸಿರುವುದು ಭಾರತೀಯ ಜನಾಂಗದ ಹಿರಿಮೆಯನ್ನು ಸ್ವತಃ
ಅರಿತುಕೊಳ್ಳಲು; ಭಾರತೀಯ ಜನನಾಂಗದ ಹಿರಿಮೆಯನ್ನು ಅರಿತುಕೊಳ್ಳಲು ಅಲ್ಲ.
ತಿದ್ದಿದ ತಿದ್ದುಪಡಿ: ಮುದ್ರಣ ದೋಷದಿಂದಾಗಿ "ಮಜಾವಾಣಿ" ಎಂದಿರಬೇಕಾದ್ದು "ಪ್ರಜಾವಾಣಿ" ಎಂದು ಮುದ್ರಿತವಾಗಿದೆ. ಪ್ರಜಾವಾಣಿ ದಿನಪತ್ರಿಕೆಯ ಸಂಪಾದಕೀಯದಲ್ಲಿ ಯಾವುದೇ ಮುದ್ರಣ ದೋಷವಿರಲಿಲ್ಲ ಜೊತೆಗೆ ಅದು ಮೇಲಿನ ತಿದ್ದುಪಡಿಯನ್ನೂ ಪ್ರಕಟಿಸಿಲ್ಲ.ಇನ್ನೊಂದು ಪತ್ರಿಕೆಯಲ್ಲಿ ಇಲ್ಲದ ಮುದ್ರಣ ದೋಷವನ್ನು ಕಲ್ಪಿಸಿ ಅದನ್ನು ತಿದ್ದಲು ಬೇಡದ ತಿದ್ದುಪಡಿಯನ್ನು ಸೃಷ್ಟಿಸುವ ಸ್ವಾತಂತ್ರ್ಯ ಇರುವುದು ನಮ್ಮಂತಹ ಪತ್ರಿಕೆಗಳಿಗೆ ಮಾತ್ರ. ದುರುದ್ದೇಶರಹಿತವಾಗಿ ಪ್ರಜಾವಾಣಿಯಲ್ಲಿಲ್ಲದ ತಿದ್ದುಪುಡಿಯನ್ನು ಪ್ರಕಟಿಸಿದ್ದಕ್ಕಾಗಿ ವಿಷಾದಿಸುತ್ತೇವೆ.
Labels: ಸಿನೆಮಾ



6 Comments:
ಬಹುದಿನಗಳಿಂದ ಬ್ಲಾಗದಿದ್ದ ವಿವಿಯವರು ಮತ್ತೆ ಬ್ಲಾಗ ತೊಡಗಿರುವುದು ಸಂತೋಷದ ಸಂಗತಿ. ಕನ್ನಡ ಟೈಮ್ಸ್ ಆಫ್ ಇಂಡಿಯಾ ತೊಡಗಿರುವ ಹೊತ್ತಿನಲ್ಲೇ ಮಜಾವಾಣಿಯೂ ಮತ್ತೆ ಆರಂಭಗೊಂಡಿರುವುದಕ್ಕೆ ಪರಸ್ಪರ ಸಂಬಂಧವಿದೆಯೇ
ಮಾನ್ಯ ಶೂ.ಸಂ.ರವರಿಗೆ,
ಬಾಲಕ ವಿ.ವಿ. ಮಾಡುವ ನಮಸ್ಕಾರಗಳು.
ಆದಾಗಿ ಉ.ಕು.ಸಾಂ.
ಕನ್ನಡ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೂ ಮಜಾವಾಣಿಗೂ ಯಾವುದೇ ರೀತಿಯ ಅಕ್ರಮ ಸಂಬಂಧ ಇಲ್ಲವೆಂದು ತಿಳಿಸಲು ಇಚ್ಛಿಸುತ್ತೇನೆ.
ಆದರೆ ಕನ್ನಡ ಪತ್ರಿಕಾರಂಗದ ದಿಗ್ಗಜನೆನೆಸಿಕೊಂಡಿರುವ ಮಜಾವಾಣಿಗೆ ಈಗಷ್ಟೇ ಕನ್ನಡದಲ್ಲಿ ಕಣ್ಣು ಬಿಡುತ್ತಿರುವ ಟೈಮ್ಸ್ ಆಫ್ ಇಂಡಿಯಾ ಎಂಬ ಹಸುಗೂಸಿಗೆ ನೀರೆರೆದು ಪೋಷಿಸುವ ಜವಾಬ್ದಾರಿ ಖಂಡಿತಾ ಇದೆ. ಕನ್ನಡ ಓದುಗರಿಗೆ ಅದು ಮತ್ತಷ್ಟು ಚಿತ್ರತಾರೆಯರ ಚಿತ್ರಗಳನ್ನು ನೀಡುವಂತಾಗಲಿ ಎಂದು ನಾವು ಹಾರೈಸುತ್ತೇವೆ.
ಇಂತೀ,
ವಿ.ವಿ.
[ಮು.ಪ್ರ.ವ್ಯ.ಉ.ಸಂಪಾದಕ]
ನಿಮ್ಮ ಶೀಘ್ರ ಪ್ರತಿಕ್ರಿಯೆಗೆ ಧನ್ಯವಾದಗಳು. ಹಸುಗೂಸಿಗೆ ಹಾಲೆರೆಯುವ ನಿಮ್ಮ ಕ್ರಿಯೆ ಹಾವಿಗೆ ಹಾಲೆರದಂತಾಗದಿದ್ದರೆ ಸರಿ.
ಹಸುಗೂಸಿಗೆ ಹಾಲೆರೆಯುವುದೇ?!
ನಾವು ಕೇವಲ ನೀರಿಂದ ಎರೆಯುವ ಯೋಚನೆ ಮಾತ್ರ ಮಾಡುತ್ತಿದ್ದೆವು. ಹೋಗಲಿ ಬಿಡಿ. ತರಗೆಲೆಗೆ ಕಾಲೆರಗಿದಂತೆ ನೋಡಿಕೊಂಡರಾಯಿತು!
ವಿವಿ ಅವರಿಗೆ ಸ್ವಾಗತ !
ಎನು ಸ್ವಾಮಿ ಚಂದದಾರು ಇದಾರ ಅನ್ನೋದು ಮರೆತು ಮಜಾವಾಣಿ ಬಾಗಿಲು ಹಾಕಿಕೊಂಡು ಹೋಗಿದ್ದು ಎಲ್ಲಿಗೆ??
ಇರಲಿ..ಇನ್ಮೇಲಾದರೂ ಸಮಯಕ್ಕೆ ಸರಿಯಾಗಿ ಮವಾ ಬರಲಿ..
ಜೇನು ಗೂಡಿಗೆ ಕೈ ಹಾಕುವ ವಿಷಯ ಭಾರತ ಪ್ರವಾಸೋದ್ಯಮಕ್ಕೆ ಬಂದದ್ದಾರು ಹೇಗೆ?
by accident i saw this blog, quite interesting.
aadare illina sampaadakara commentgalannu noduttiddare idara hinde eno uddehsavoo iddanthideyalla
Post a Comment
Links to this post:
Create a Link
<< Home