ಮಜಾವಾಣಿಗೆ ರಜಾ!

ಪ್ರಿಯ ಓದುಗರೇ,
ಮಜಾವಾಣಿ ಪತ್ರಿಕೆಯ ಕಾರ್ಯಾಲಯವನ್ನು ಹದಿನಾರು ವರ್ಷಗಳ ನಂತರ ಅಮೆರಿಕದಿಂದ ಬೆಂಗಳೂರಿಗೆ ಸ್ಥಳಾಂತರಿಸುವ ಕಾರ್ಯ ಚಟುವಟಿಕೆಗಳು ನಾಳೆಯಿಂದ ಪ್ರಾರಂಭವಾಗಲಿವೆ. ಹೀಗಾಗಿ ನಮ್ಮ ಪತ್ರಿಕೆಗೆ ಅನಿರ್ದಿಷ್ಟ ಕಾಲ ರಜೆ ಘೋಷಿಸಬೇಕಾದಂತ ಅನಿವಾರ್ಯತೆ ಎದುರಾಗಿದೆ.
ವಿಶ್ವಾದ್ಯಂತ ಇರುವ ನಮ್ಮ ಮೂರುವರೆ ಮಂದಿ ಓದುಗರು, ಇಲ್ಲಿಯವರೆಗೆ ನಮಗೆ ನೀಡಿರುವ ಪ್ರೋತ್ಸಾಹಕ್ಕೆ ನಾನು ಅವರಿಗೆ ಚಿರ ಋಣಿ. ಈ ಪ್ರೋತ್ಸಾಹ ಮುಂದೆಯೂ ಹೀಗೆಯೆ ಮುಂದುವರೆಸಬೇಕೆಂದು ಪ್ರಾರ್ಥಿಸುತ್ತೇನೆ.
ಈ ಸಂದರ್ಭದಲ್ಲಿ ರಾ.ಶಿ.ಯವರು ಕೊರವಂಜಿ ಪತ್ರಿಕೆಯನ್ನು ಮುಚ್ಚುವಾಗ ಹೇಳಿದ್ದರೆನ್ನಲಾದ ಮಾತುಗಳು ನೆನಪಿಗೆ ಬರುತ್ತಿವೆ: "ಹೋಗ್ಬರ್ತೀನಿ ಅಂದ್ಯೇನೆ ಕೊರವಂಜೀ..? ನೀನಿದ್ದಿದ್ದಿದ್ದೇ ಗೊತ್ತಾಗ್ಲಿಲ್ವಲ್ಲೇ!" ಈ ಮಾತುಗಳು ಕೊರವಂಜಿಗಿಂತ ಮಜಾವಾಣಿಗೆ ಹೆಚ್ಚು ಸೂಕ್ತವೆಂದು ನನ್ನ ಅಭಿಪ್ರಾಯ.
ಕಳಚಿಕೊಳ್ಳುವ ಮುನ್ನ ಹೇಳಲೇ ಬೇಕಾದ ಮಾತು: ಕನ್ನಡದ ಖ್ಯಾತ ವ್ಯಂಗ್ಯ ಚಿತ್ರಕಾರರಾದ "ಹರಿಣಿ"ಯವರ ಚಿತ್ರಗಳು ಈಗ ಇಂಟರ್ನೆಟ್ನಲ್ಲಿ ಲಭ್ಯ. ಅವುಗಳನ್ನು ನೀವು ಇಲ್ಲಿ ನೋಡಬಹುದು.
ವಂದನೆಗಳೊಂದಿಗೆ,
ಶೇಷಾದ್ರಿ ("ವಿ.ವಿ.")
Labels: ಮಜಾವಾಣಿ