ಚುನಾವಾಣಿ '08: ಜನ ವಾಣಿ


Labels: ಚುನಾವಾಣಿ '08, ಜನ ವಾಣಿ, ರಾಜಕೀಯ


Labels: ಚುನಾವಾಣಿ '08, ಜನ ವಾಣಿ, ರಾಜಕೀಯ
"ಚುನಾವಣೆಯಿಂದ ಚುನಾವಣೆಗೆ ಮತದಾರರ ಸಂಖ್ಯೆ ಹೆಚ್ಚುತ್ತಿದ್ದರೂ, ನಮ್ಮ ಆಯೋಗ ಸಿರಿವಂತ ಮತದಾರರನ್ನು ಆಕರ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಮುರುಕಲು ಸರ್ಕಾರಿ ಶಾಲೆಯಲ್ಲಿರುವ ಮತಗಟ್ಟೆ, ಸಾಲುಗಟ್ಟಿ ನಿಲ್ಲುವ ಸಾಮಾನ್ಯ ಜನ, ಇದೆಲ್ಲಾ ಮಾಸ್ ಮತದಾರರಿಗೆ ಸರಿಹೊಂದಬಹುದಾದರೂ, ಕ್ಲಾಸ್ ಮತದಾರರಿಗೆ ಖಂಡಿತಾ ಇಷ್ಟವಾಗುತ್ತಿರಲಿಲ್ಲ. ಅದಕ್ಕಾಗಿ, ಇದೇ ಪ್ರಥಮ ಬಾರಿಗೆ ಬೆಂಗಳೂರಿನ ಲೀಲಾ ಪ್ಯಾಲೇಸ್ ಮತ್ತು ಟಾಜ್ ವೆಸ್ಟ್ ಎಂಡ್ ಹೋಟೆಲುಗಳಲ್ಲಿ ಫುಲ್ಲೀ ಏರ್ ಕಂಡೀಷನ್ಡ್ ಮತಗಟ್ಟೆಗಳನ್ನು ತೆರೆಯಲಾಗಿದೆ. ಈ ಮತಗಟ್ಟೆಗಳು ಕೇವಲ ಆಹ್ವಾನಿತ ಮತದಾರರಿಗೆ ಮಾತ್ರ ಲಭ್ಯವಿದ್ದು ಮತದಾನದ ಅನುಭವವನ್ನು ಸುಖೀಕರಿಸಲು ಸಂಪೂರ್ಣವಾಗಿ ಸಜ್ಜಾಗಿವೆ" ಎಂದ ಗೋಪಾಲಸ್ವಾಮಿಯವರು, "ಈ ಸೂಪರ್ ಡೀಲಕ್ಸ್ ಮತಗಟ್ಟೆಗಳಲ್ಲಿ ಪ್ಯಾರಿಸ್ನಿಂದ ಆಮದು ಮಾಡಿಕೊಂಡಿರುವ ನೇಯ್ಲ್ ಪಾಲಿಶ್ ಅನ್ನು ಉಗುರುಗಳಿಗೆ ಹಚ್ಚಲಾಗುವುದು. ಬೆರಳ ಮೇಲೆ ಕಪ್ಪು ಇಂಕಿನ ಅಸಹ್ಯಕರ ಕಲೆಯ ಭಯ ಇಲ್ಲಿಲ್ಲ. ಪ್ರಸಾದ್ ಬಿದ್ದಪ್ಪ ಅಂತಹ ಗಣ್ಯರು ಸಹ ಯಾವುದೇ ಹಿಂಜರಿಕೆ ಇಲ್ಲದೆ ಇನ್ನು ಮುಂದೆ ಇಲ್ಲಿ ಮತ ಚಲಾಯಿಸಬಹುದು" ಎಂದರು.Labels: ಚುನಾವಾಣಿ '08, ರಾಜಕೀಯ
ಚನ್ನೈ, ಏಪ್ರಿಲ್ ೩೧: ಕಾವೇರಿ ಜಲ ವಿವಾದ ಇತ್ಯರ್ಥವಾಗುವವರೆಗೂ, ತಮಿಳು ನಾಡಿನಲ್ಲಿ ಮೈಸೂರು ಪಾಕ್ ಮಾರಾಟ ಮತ್ತು ಸೇವನೆಯನ್ನು ಬಹಿಷ್ಕರಿಸುವಂತೆ ತಮಿಳು ಪರ ಸಂಘಟನೆಗಳು ಕರೆ ನೀಡಿವೆ.Labels: ಅಗ್ರ ರಾಷ್ಟ್ರೀಯ ಸುದ್ದಿ
ಬೆಂಗಳೂರು, ಏಪ್ರಿಲ್ ೧: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಿಯೋಗವೊಂದು ನಗರದ ಪೋಸ್ಟ್ ಮಾಸ್ಟರ ಜನರಲ್ ಅವರನ್ನು ಭೇಟಿ ಮಾಡಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ಹೃದಯಕ್ಕೆ ಪ್ರತ್ಯೇಕ ಪೋಸ್ಟಲ್ ಕೋಡ್ ನೀಡುವಂತೆ ಆಗ್ರಹಿಸಿತು.Labels: ರಾಜಕೀಯ
ತಲಕಾವೇರಿ, ಏಪ್ರಿಲ್ ೧: ನದಿ ಮೂಲ, ಋಷಿ ಮೂಲ ತಿಳಿಯುವುದು ಹೇಗೆ ಕಷ್ಟವೋ ಹಾಗೆಯೇ ತಮಿಳರ ಕಾವೇರಿ ಮೇಲಿನ ಆಸೆಯ ಮೂಲವನ್ನು ತಿಳಿಯುವುದೂ ಕಷ್ಟ. ತಮಿಳು ನಾಡು-ಕರ್ನಾಟಕದ ನಡುವಿನ ವಿವಾದ ಸುಪ್ರೀಂ ಕೋರ್ಟಿನ ಕಟ್ಟೆ ಹತ್ತಿದ್ದರೂ, ತಮಿಳು ನಾಡಿನವರಿಗೆ ಕಾವೇರಿಯ ಮೇಲೆ ಏಕೆ ಇಷ್ಟೊಂದು ಪ್ರೇಮ ಎನ್ನುವ ಪ್ರಶ್ನೆ ಮಾತ್ರ ಇಂದಿನ ವರೆಗೆ ಪ್ರಶ್ನೆಯಾಗಿಯೇ ಉಳಿದಿತ್ತು.Labels: ಅತಿಥಿ, ತನಿಖಾ ವರದಿ
ಬೆಂಗಳೂರು, ಮಾರ್ಚ್ ೨೧: ಮಾಜಿ ಮುಖ್ಯ ಮಂತ್ರಿ ಯೆಡ್ಯೂರಪ್ಪನವರಿಂದ ತಮಗೆ ಅಂತಹ ತೊಂದರೆ ಏನೂ ಆಗುತ್ತಿಲ್ಲವೆಂದು ವಿಧಾನ ಸೌಧ ನೌಕರರು ಹೇಳಿದ್ದಾರೆ.Labels: ರಾಜಕೀಯ