ಉತ್ತಮ ಗೊಬ್ಬರಕ್ಕಾಗಿ ಹೊಲದಲ್ಲಿ ವಿಧಾನ ಮಂಡಲದ ಸಮಾವೇಶ!


ಬೆಂಗಳೂರು ಜ. ೨೨: ಇತ್ತೀಚೆಗಿನ ರಾಜಕೀಯ ಬೆಳವಣಿಗೆಗಳ ಸಂಬಂಧಿಸಿದಂತೆ ರಾಜ್ಯಪಾಲ ಎಚ್.ಆರ್.ಭರದ್ವಾಜ್ ವಿರುದ್ಧ ಬಿ.ಜೆ.ಪಿ. ಹಮ್ಮಿ ಕೊಂಡಿದ್ದ ರಾಜ್ ಭವನ್ ಚಲೋ ಕಾರ್ಯಕ್ರಮ ಆಟೋರಿಕ್ಷಾ ಚಾಲಕರು ಮೀಟರಿಗೆ ಎರಡರಷ್ಟು ಕೇಳಿದ್ದರಿಂದ ವಿಫಲವಾಗಿರುವುದಾಗಿ ವರದಿಯಾಗಿದೆ.
ಬೆಂಗಳೂರು ಡಿ. 9: ವಿಖ್ಯಾತ ಡಿಸೈನರ್ ಸಂಸ್ಥೆಯಾದ ಫ್ರಾನ್ಸಿನ ಲಕೋಸ್ಟ್ ಸಂಸ್ಥೆ ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಮೊಸಳೆ ಕಣ್ಣೀರನ್ನು ಕ್ರೋಕೋಟಿಯೇ ಎಂಬ ಹೆಸರಿನಲ್ಲಿ ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡ್ಯೂರಪ್ಪನವರ ಸಮ್ಮುಖದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು.
Labels: ಜಾಹಿರಾತು, ಡಾ.ಯು.ಆರ್.ಅನಂತಮೂರ್ತಿ, ರಾಜಕೀಯ, ವಾಣಿಜ್ಯ, ಸರ್ಕಾರ
ಮಜಾವಾಣಿ: ನಿಮ್ಮ ಈ ವಿಶಿಷ್ಟ ಕಲೆಯ ಹಿನ್ನೆಲೆ ತಿಳಿಸಿ.
ಪಾಟಿಯಾಲಾದ ಗ್ಯಾನಿ ಜೈಲ್ ಸಿಂಗ್ ಕೃಷಿ ಸಂಶೋಧನಾಲಯದ ನೂತನ ಪ್ರಯೋಗ ಶಾಲೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಕೇಂದ್ರ ಕೃಷಿ ಸಚಿವ ಶರದ್ ಪವಾರ್, ಇನ್ನು ಕೆಲವೇ ವರ್ಷಗಳಲ್ಲಿ ದೇಶದ ಹಳ್ಳಿ-ಹಳ್ಳಿಗಳಲ್ಲೂ ಉತ್ತಮ ತಳಿಯ ರೈತರು ಕಂಡು ಬರಲಿದ್ದು, ರೈತರ ಆತ್ಮಹತ್ಯೆ ಎಂಬುದು ಸಂಪೂರ್ಣವಾಗಿ ಮರೆತ ಮಾತಾಗಲಿದೆ ಎಂದರು.
Labels: ಮಜಾವಾಣಿ

ಬೆಂಗಳೂರು, ಜೂನ್ ೩೧: ವಿಶ್ವಾದ್ಯಂತ ದೂರದರ್ಶನದ ನೋಡುಗರನ್ನು ಆಕರ್ಶಿಸಿರುವ ಟಕೇಶಿ'ಸ್ ಕ್ಯಾಸಲ್ ಈಗ ಬೆಂಗಳೂರಿನಲ್ಲಿ ಆರಂಭವಾಗಿದೆ.
ಅದರಿಂದ ಲಾಭವೇನಾದರೂ ಇದೆಯೇ ಎಂಬ ಆಲೋಚನೆ ಬಂತು. ಅದರ ಫಲವೇ ಡಿಕೇಶಿ'ಸ್ ಕ್ಯಾಸಲ್. ಶಾಸಕರ ಭವನದ ಸಮೀಪ ೪.೨೦ ಎಕರೆ ವಿಶಾಲ ಜಾಗದಲ್ಲಿ ನಿರ್ಮಿಸಲಾಗಿದೆ. ಪಕ್ಷಭೇದವಿಲ್ಲದೆ ರಾಜಕಾರಣಿಗಳೆಲ್ಲರೂ ಇದರಲ್ಲಿ ಭಾಗವಹಿಸುತ್ತಿರುವುದು ಸಂತೋಷದ ವಿಚಾರ" ಎಂದರು.
ಮುಂಬೈ, ಏಪ್ರಿಲ್ ೩೧: ಬಾಂಬೆ ಡೈಯಿಂಗ್, ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಸೇರಿಸಿ, "ಬಾಂಬೆ" ಎಂದು ಹೆಸರಿರುವ ಪ್ರತಿಯೊಂದು ಸಂಘ ಸಂಸ್ಥೆಯೂ ಅದನ್ನು "ಮುಂಬೈ"ಗೆ ಬದಲಿಸ ಬೇಕೆಂದು ಶಿವಸೇನಾ ಮುಖ್ಯಸ್ತ ಬಾಳ್ ಠಾಕ್ರೆ ಎಚ್ಚರಿಕೆ ನೀಡಿರುವ ಬೆನ್ನಲ್ಲೇ, ಅಣು ಬಾಂಬನ್ನು ಅಣು "ಮುಂಬ್" ಎಂದು ಕರೆಯುವಂತೆ ಕೂಗೆದ್ದಿದೆ.Labels: ರಾಜಕೀಯ
ಮಧ್ಯಾಹ್ನವೋ.. ರಾತ್ರಿಯೋ... ಅಂತೂ ಊಟದ ಸಮಯ. ಬೆಂಗಳೂರು ನಗರ. ಕನ್ನಡಿಗರ ಊರು. ಕರ್ನಾಟಕದ ರಾಜಧಾನಿ. ಮಲ್ಲೇಶ್ವರ ಆದರೂ ಸರಿ, ಜಯನಗರ ನಾಲ್ಕನೆಯ ಬ್ಲಾಕ್ ಆದರೂ ಸರಿ. ಯಾವುದೇ ಸೌತ್ ಇಂಡಿಯನ್ ರೆಸ್ಟಾರಂಟ್ ಆದರೂ ಪರವಾಗಿಲ್ಲ. ನಿಮಗೆ ಇಡ್ಲಿ ಅಥವಾ ದೋಸೆ ಬೇಕಿದ್ದರೆ, ದಯವಿಟ್ಟು ಕ್ಷಮಿಸಿ, ಅವುಗಳ ಟೈಮ್ ಮುಗಿದಿದೆ. ಆದರೆ, ಗೋಬಿ ಮಂಚೂರಿ? ಡ್ರೈ ಬೇಕೋ?! ಗ್ರೇವಿಯಲ್ಲಿ ಬೇಕೋ?!!

Labels: ಚುನಾವಾಣಿ '08, ಜನ ವಾಣಿ, ರಾಜಕೀಯ
"ಚುನಾವಣೆಯಿಂದ ಚುನಾವಣೆಗೆ ಮತದಾರರ ಸಂಖ್ಯೆ ಹೆಚ್ಚುತ್ತಿದ್ದರೂ, ನಮ್ಮ ಆಯೋಗ ಸಿರಿವಂತ ಮತದಾರರನ್ನು ಆಕರ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಮುರುಕಲು ಸರ್ಕಾರಿ ಶಾಲೆಯಲ್ಲಿರುವ ಮತಗಟ್ಟೆ, ಸಾಲುಗಟ್ಟಿ ನಿಲ್ಲುವ ಸಾಮಾನ್ಯ ಜನ, ಇದೆಲ್ಲಾ ಮಾಸ್ ಮತದಾರರಿಗೆ ಸರಿಹೊಂದಬಹುದಾದರೂ, ಕ್ಲಾಸ್ ಮತದಾರರಿಗೆ ಖಂಡಿತಾ ಇಷ್ಟವಾಗುತ್ತಿರಲಿಲ್ಲ. ಅದಕ್ಕಾಗಿ, ಇದೇ ಪ್ರಥಮ ಬಾರಿಗೆ ಬೆಂಗಳೂರಿನ ಲೀಲಾ ಪ್ಯಾಲೇಸ್ ಮತ್ತು ಟಾಜ್ ವೆಸ್ಟ್ ಎಂಡ್ ಹೋಟೆಲುಗಳಲ್ಲಿ ಫುಲ್ಲೀ ಏರ್ ಕಂಡೀಷನ್ಡ್ ಮತಗಟ್ಟೆಗಳನ್ನು ತೆರೆಯಲಾಗಿದೆ. ಈ ಮತಗಟ್ಟೆಗಳು ಕೇವಲ ಆಹ್ವಾನಿತ ಮತದಾರರಿಗೆ ಮಾತ್ರ ಲಭ್ಯವಿದ್ದು ಮತದಾನದ ಅನುಭವವನ್ನು ಸುಖೀಕರಿಸಲು ಸಂಪೂರ್ಣವಾಗಿ ಸಜ್ಜಾಗಿವೆ" ಎಂದ ಗೋಪಾಲಸ್ವಾಮಿಯವರು, "ಈ ಸೂಪರ್ ಡೀಲಕ್ಸ್ ಮತಗಟ್ಟೆಗಳಲ್ಲಿ ಪ್ಯಾರಿಸ್ನಿಂದ ಆಮದು ಮಾಡಿಕೊಂಡಿರುವ ನೇಯ್ಲ್ ಪಾಲಿಶ್ ಅನ್ನು ಉಗುರುಗಳಿಗೆ ಹಚ್ಚಲಾಗುವುದು. ಬೆರಳ ಮೇಲೆ ಕಪ್ಪು ಇಂಕಿನ ಅಸಹ್ಯಕರ ಕಲೆಯ ಭಯ ಇಲ್ಲಿಲ್ಲ. ಪ್ರಸಾದ್ ಬಿದ್ದಪ್ಪ ಅಂತಹ ಗಣ್ಯರು ಸಹ ಯಾವುದೇ ಹಿಂಜರಿಕೆ ಇಲ್ಲದೆ ಇನ್ನು ಮುಂದೆ ಇಲ್ಲಿ ಮತ ಚಲಾಯಿಸಬಹುದು" ಎಂದರು.Labels: ಚುನಾವಾಣಿ '08, ರಾಜಕೀಯ
ಚನ್ನೈ, ಏಪ್ರಿಲ್ ೩೧: ಕಾವೇರಿ ಜಲ ವಿವಾದ ಇತ್ಯರ್ಥವಾಗುವವರೆಗೂ, ತಮಿಳು ನಾಡಿನಲ್ಲಿ ಮೈಸೂರು ಪಾಕ್ ಮಾರಾಟ ಮತ್ತು ಸೇವನೆಯನ್ನು ಬಹಿಷ್ಕರಿಸುವಂತೆ ತಮಿಳು ಪರ ಸಂಘಟನೆಗಳು ಕರೆ ನೀಡಿವೆ.Labels: ಅಗ್ರ ರಾಷ್ಟ್ರೀಯ ಸುದ್ದಿ
ಬೆಂಗಳೂರು, ಏಪ್ರಿಲ್ ೧: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಿಯೋಗವೊಂದು ನಗರದ ಪೋಸ್ಟ್ ಮಾಸ್ಟರ ಜನರಲ್ ಅವರನ್ನು ಭೇಟಿ ಮಾಡಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ಹೃದಯಕ್ಕೆ ಪ್ರತ್ಯೇಕ ಪೋಸ್ಟಲ್ ಕೋಡ್ ನೀಡುವಂತೆ ಆಗ್ರಹಿಸಿತು.Labels: ರಾಜಕೀಯ
ತಲಕಾವೇರಿ, ಏಪ್ರಿಲ್ ೧: ನದಿ ಮೂಲ, ಋಷಿ ಮೂಲ ತಿಳಿಯುವುದು ಹೇಗೆ ಕಷ್ಟವೋ ಹಾಗೆಯೇ ತಮಿಳರ ಕಾವೇರಿ ಮೇಲಿನ ಆಸೆಯ ಮೂಲವನ್ನು ತಿಳಿಯುವುದೂ ಕಷ್ಟ. ತಮಿಳು ನಾಡು-ಕರ್ನಾಟಕದ ನಡುವಿನ ವಿವಾದ ಸುಪ್ರೀಂ ಕೋರ್ಟಿನ ಕಟ್ಟೆ ಹತ್ತಿದ್ದರೂ, ತಮಿಳು ನಾಡಿನವರಿಗೆ ಕಾವೇರಿಯ ಮೇಲೆ ಏಕೆ ಇಷ್ಟೊಂದು ಪ್ರೇಮ ಎನ್ನುವ ಪ್ರಶ್ನೆ ಮಾತ್ರ ಇಂದಿನ ವರೆಗೆ ಪ್ರಶ್ನೆಯಾಗಿಯೇ ಉಳಿದಿತ್ತು.Labels: ಅತಿಥಿ, ತನಿಖಾ ವರದಿ
ಬೆಂಗಳೂರು, ಮಾರ್ಚ್ ೨೧: ಮಾಜಿ ಮುಖ್ಯ ಮಂತ್ರಿ ಯೆಡ್ಯೂರಪ್ಪನವರಿಂದ ತಮಗೆ ಅಂತಹ ತೊಂದರೆ ಏನೂ ಆಗುತ್ತಿಲ್ಲವೆಂದು ವಿಧಾನ ಸೌಧ ನೌಕರರು ಹೇಳಿದ್ದಾರೆ.Labels: ರಾಜಕೀಯ
ನವದೆಹಲಿ, ಮಾರ್ಚ್ ೧೭: ಊಟದ ನಂತರ ಎಂಜಲೆಲೆಗಳ ಜೊತೆಗೆ ಕೊಬ್ಬಿನಂಶ ತುಂಬಿದ ಆನಾರೋಗ್ಯಕರ ಆಹಾರ ಪದಾರ್ಥಗಳನ್ನೂ ಜನರು ಬೀದಿಗೆ ಬಿಸಾಡುತ್ತಿರುವ ಬಗೆಗೆ ಮಾಜಿ ಸಚಿವೆ ಮನೇಕಾ ಗಾಂಧಿ ಕಳವಳ ವ್ಯಕ್ತ ಪಡಿಸಿದ್ದಾರೆ.Labels: ಪಾಶವೀ ಪ್ರೇಮ
Labels: ರಾಜಕೀಯ
ಜಲಂಧರ್, ನವೆಂಬರ್ ೩೧: ಖ್ಯಾತ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಅವರು ತಮ್ಮ ಬಲಗೈ ಬಗೆಗೆ ತಾವು ಯಾವುದೇ ಮಲತಾಯಿ ಧೋರಣೆ ತೋರಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.Labels: ಕ್ರೀಡೆ


ಊಹಾಪೋಹಗಳಿಗೆ ಕಾರಣವಾಗಿತ್ತು. ಕೆಲವರು "ಯಡಿಯೂರಪ್ಪನವರ ಮೀಸೆ ಮೀಡಿಯಾ ಷೈ" ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು.Labels: ತನಿಖಾ ವರದಿ, ರಾಜಕೀಯ

ಬಸ್ಸುಗಳಲ್ಲಿ ಎರಡೆರಡು ಟಿ.ವಿ.ಗಳನ್ನು ಅಳವಡಿಸಿರುವುದು ಉತ್ತಮ ಬೆಳವಣಿಗೆಯಾದರೂ, ಪ್ರಯಾಣಿಕರ ನೇತ್ರ ಶಿಕ್ಷಣಕ್ಕೆ ಪೂರಕವಾಗಿರುವ ಚಲನ ಚಿತ್ರಗಳನ್ನು ತೋರಿಸದಿರುವುದು ಕಳವಳಕ್ಕೆ ಕಾರಣವಾಗಿದೆ. ಉದಾಹರಣೆಗೆ, ಉಡುಪಿಯ ಕಾಲೇಜು ವಿದ್ಯಾರ್ಥಿನಿ ಕುಮಾರಿ ಸುಮತಿ ನಾಡಿಗ್ ಪ್ರಕಾರ, ಇಂತಹ ಚಲನಚಿತ್ರಗಳಿಂದಾಗಿ ಅವರು ಕಾಲೇಜನ್ನು ಸಮಯಕ್ಕೆ ಸರಿಯಾಗಿ ತಲುಪಲಾಗುತ್ತಿಲ್ಲ. "ಕಳೆದ ಐದು ನಿಮಿಷಗಳಲ್ಲಿ ಹತ್ತು ಬಸ್ಸುಗಳು ಮಂಗಳೂರಿಗೆ ಹೋದವು. ಆದರೆ ಒಂದರಲ್ಲೂ ನನಗೆ ಬೇಕಿದ್ದ ಸಲ್ಮಾನ್ ಖಾನ್ ಫಿಲಂ ಹಾಕಿರಲಿಲ್ಲ. ಹೀಗಾದರೆ, ನಾನು ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತಲುಪುವುದಾದರೂ ಹೇಗೆ?!" ಎನ್ನುತ್ತಾರೆ ಅವರು.Labels: ಚಿಂತನ-ಮಂಥನ
Labels: ರಾಜಕೀಯ

ನವದೆಹಲಿ, ಸೆ. ೧೩: ಖ್ಯಾತ ಚಿತ್ರತಾರೆ ಮತ್ತು ಸಂಸದೀಯ ನೃತ್ಯ ಪಟು ಹೇಮ ಮಾಲಿನಿಯವರ ಕೆನ್ನೆಗಳು ಕೇಂದ್ರ ಸರ್ಕಾರಕ್ಕೆ ಪೇಚುಂಟು ಮಾಡಿರುವ ಸಂಗತಿ ವರದಿಯಾಗಿದೆ.
Labels: ಅಗ್ರ ರಾಷ್ಟ್ರೀಯ ಸುದ್ದಿ, ರಾಜಕೀಯ, ಸರ್ಕಾರ, ಸಿನೆಮಾ
ಕಿರಿಯರಿಗಾಗಿ ಕಾಮಾ ಸೂತ್ರ: ಈ ಪುಸ್ತಕದ ಲೇಖಕ ಗೋಪಾಲ ಕೃಷ್ಣ ಮಜಾವಾಣಿ ಪತ್ರಿಕೆಯ ವೈಜ್ಞಾನಿಕ ವರದಿಗಾರರು ಮತ್ತು ಪ್ರತಿಷ್ಠಿತ ಮಜಾವಾಣಿ ವೈಜ್ಞಾನಿಕ ಪ್ರಬಂಧ ಪ್ರಶಸ್ತಿ ವಿಜೇತರು.
ಎ ಬ್ರೀಫ್ ಹಿಸ್ಟರಿ ಆಫ್ ಟೈಮ್ ಫಾರ್ ಕಿಡ್ಸ್: ನೀವು ಈಗಾಗಲೇ ಸ್ಟೀಫನ್ ಹಾಕಿಂಗ್ ಅವರ "ಎ ಬ್ರೀಫ್ ಹಿಸ್ಟರಿ ಆಫ್ ಟೈಮ್" ಕೈಲಿ ಹಿಡಿದುಕೊಂಡು ಓಡಾಡುತ್ತಲೋ, ಎಲ್ಲರಿಗೂ ಕಾಣುವಂತೆ ಮೇಜಿನ ಮೇಲಿಟ್ಟೋ ಪಾಂಡಿತ್ಯ ಪ್ರದರ್ಶಿಸಿದ್ದೀರಿ. ಈಗ ನಿಮ್ಮ ಮಕ್ಕಳ ಸರದಿ.
ನೈಸರ್ಗಿಕ ವಿಕಸನದಲ್ಲಿ ಹಿಂದುಳಿದ ಮಾತ್ರಕ್ಕೆ ಮನುಷ್ಯತ್ವವೇ ಇಲ್ಲವೇ?Labels: ಪಾಶವೀ ಪ್ರೇಮ
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೃತೀಯ ರಾಷ್ಟ್ರಗಳ ಮಕ್ಕಳಿಗೆ ಅಪಾರ ಬೇಡಿಕೆ ಇದ್ದು, ಪ್ರಖ್ಯಾತ ಹಾಲಿವುಡ್ ತಾರೆಯರೂ ಸೇರಿದಂತೆ ಪಾಶ್ಚಾತ್ಯ ದೇಶಗಳ ಹಲವಾರು ಸಿರಿವಂತರು ಬಡ ದೇಶಗಳಿಂದ ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಿದ್ದಾರೆ. ಈ ಬೇಡಿಕೆಯಿಂದಾಗಿ ಮಕ್ಕಳ ಕಾಳಸಂತೆಯಲ್ಲಿ, ನಕಲಿ-ಶಿಶುಗಳನ್ನು ಮಾರಾಟಮಾಡುವ ತಂಡಗಳು ಸಹ ಕಾರ್ಯಪ್ರವೃತ್ತವಾಗಿವೆ ಎನ್ನಲಾಗಿದೆ.
ಬಯಸದ ಖ್ಯಾತ ಗಾಯಕಿ ಮತ್ತು ಹಾಲಿವುಡ್ ಚಿತ್ರತಾರೆಯೊಬ್ಬರು, ತಾವು ವಂಚನೆಗೆ ಈಡಾಗಿರುವುದನ್ನು ಒಪ್ಪಿಕೊಂಡರು. "ನಾನು ಆರು ವರ್ಷಗಳಿಂದ ಬೆಳೆಸುತ್ತಿರುವ ಮಗು, ಮಗು ಅಲ್ಲ, ಚಿಂಪಾಂಜಿ ಮರಿ ಎಂದು ಗೊತ್ತಾದಾಗ ನನಗೆ ದಿಕ್ಕೇ ತೋಚಲಿಲ್ಲ. ಪಶುವೈದ್ಯರ ತಪಾಸಣಾ ವರದಿ ಓದುವವರೆಗೆ, ನನಗೆ ಕಿಂಚಿತ್ತೂ ಅನುಮಾನ ಬಂದಿರಲಿಲ್ಲ. ಶಾಲೆಯಲ್ಲಿ ಮೊದಲನೆ ತರಗತಿಯಲ್ಲಿ ಫೇಲ್ ಆದಾಗ ಕೂಡ ಪ್ರಾಯಶಃ ಲರ್ನಿಂಗ್ ಡಿಸೆಬಿಲಿಟಿ ಇರಬಹುದು ಅಂದು ಕೊಂಡಿದ್ದೆ, ನನ್ನ ಕನಸಿನಲ್ಲೂ ನನ್ನ ಮಗು ಚಿಂಪಾಂಜಿಯಿರಬಹುದೆಂಬ ಆಲೋಚನೆ ಬಂದಿರಲಿಲ್ಲ" ಎಂದು ತಮ್ಮ ವೇದನೆ ವ್ಯಕ್ತ ಪಡಿಸಿದ ಅವರು, "ನಾನು ಆರು ವರ್ಷದಿಂದ ಸಾಕಿ ಸಲುಹಿದ ಮಗುವಿಗೆ ಈಗ ’ಮಗು, ನಿಮ್ಮಪ್ಪ, ಅಮ್ಮ ಮನುಷ್ಯರಲ್ಲ. ಚಿಂಪಾಂಜಿಗಳು’ ಎಂದು ಯಾವ ಬಾಯಲ್ಲಿ ಹೇಳಲಿ. ಇನ್ನು ಮುಂದೆ ತೃತೀಯ ಜಗತ್ತಿನ ಶಿಶು ಮಾರಾಟಗಾರರನ್ನು ನಂಬುವುದಾದರೂ ಹೇಗೆ?!" ಎಂದು ಗೋಳಿಟ್ಟರು.Labels: ಕ್ರೈಮ್
ಬೆಂಗಳೂರು, ಏಪ್ರಿಲ್ ೧: ಸುಪ್ರಸಿದ್ಧ ಫ್ರೆಂಚ್ ಸಂಸ್ಥೆ ಷನೆಲ್ ಸಹಕಾರದೊಂದಿಗೆ ತಯಾರಿಸಿರುವ "ಬೂ" ಎಂಬ ಸುಗಂಧವನ್ನು ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.Labels: ರಾಜಕೀಯ
ಕೋಲ್ಕೊತಾದಲ್ಲಿ ನಡೆಯುತ್ತಿರುವ ಪುನರ್ಜನ್ಮ: ಒಂದು ಸಾಮಾಜಿಕ ಸಮಸ್ಯೆ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಅವರು, "ಪುನರ್ಜನ್ಮ ಪೀಡಿತ ರಾಷ್ಟ್ರಗಳಾದ ಭಾರತ, ಚೈನಾಗಳಲ್ಲೇ ಜನಸಂಖ್ಯಾ ಸಮಸ್ಯೆ ತಲೆದೋರಿರುವುದು ಕೇವಲ ಕಾಕತಾಳೀಯವಲ್ಲ. ಪುನರ್ಜನ್ಮರಹಿತ ರಾಷ್ಟ್ರಗಳಲ್ಲಿ ಒಮ್ಮೆ ಸತ್ತವರು ಮರು ಹುಟ್ಟುವ ಪ್ರಮೇಯವೇ ಇರುವುದಿಲ್ಲ. ಪ್ರಥಮ ಜನ್ಮಿಗಳೊಡನೆ, ಪುನರ್ಜನ್ಮಿಗಳೂ ಪದೇ ಪದೇ ಹುಟ್ಟುತ್ತಿರುವುದರಿಂದ ಭಾರತದಲ್ಲಿ ಈ ಸಮಸ್ಯೆ ಎದುರಾಗಿದೆ. ಪುನರ್ಜನ್ಮವನ್ನು ಸರ್ಕಾರ ತಕ್ಷಣವೇ ನಿಷೇಧಿಸಿದರೆ, ಕೆಲವೇ ವರ್ಷಗಳಲ್ಲಿ ಭಾರತ ಸಹ ಸೋವಿಯತ್ ರಷ್ಯಾದಂತೆ ಪ್ರಗತಿ ಪರ ದೇಶವಾಗುವುದರಲ್ಲಿ ಸಂದೇಹವಿಲ್ಲ." ಎಂದಿದ್ದಾರೆ.Labels: ರಾಜಕೀಯ
ಬೆಂಗಳೂರು, ಆಗಸ್ಟ್ ೪: ಎಂ.ಜಿ.ರಸ್ತೆಯಿಂದ ಹಿಡಿದು ಮಲ್ಲೇಶ್ವರದ ಹದಿನೆಂಟನೆಯ ಕ್ರಾಸಿನವರೆಗೆ ನಗರದ ಹಲವಾರು ಮುಖ್ಯ ರಸ್ತೆಗಳಲ್ಲಿ ಪೈರೇಟೆಡ್ ಡಿ.ವಿ.ಡಿ.ಗಳು ಅತಿ ಕಡಿಮೆ ಧರದಲ್ಲಿ ಲಭ್ಯವಿರುವುದು ಎಲ್ಲರಿಗೂ ತಿಳಿದ ವಿಷಯ. ಇಂಗ್ಲೀಷ್, ಹಿಂದಿ, ತೆಲುಗು ಕೊನೆಗೆ ತಮಿಳಿನ ಹೊಚ್ಚ ಹೊಸ ಚಲನ ಚಿತ್ರಗಳ ಪೈರೇಟೆಡ್ ಡಿ.ವಿ.ಡಿ.ಗಳು ಇಲ್ಲಿ ಲಭ್ಯ. ಆದರೆ ಕನ್ನಡ ಡಿ.ವಿ.ಡಿ. ಬಗ್ಗೆ ವಿಚಾರಿಸಿ ನೋಡಿ, ನಿಮಗೆ ಸಿಗುವುದು ಹೆಚ್ಚೆಂದರೆ ತಾತ್ಸಾರದ ನಗೆ ಮಾತ್ರ!
ಯೋಜನೆಯನ್ನು ಕಾರ್ಯಗತ ಮಾಡುವಂತೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ:
ಹಿಂದುಳಿದಿರುವ ಪೈರೇಟಿಂಗ್ ಉದ್ಯಮ: ಪಾಟಿಯಾಲದ ಗ್ಯಾನಿ ಜೈಲ್ ಸಿಂಗ್ ವಿಶ್ವ ವಿದ್ಯಾಲಯದ, ಬೂಟಾ ಸಿಂಗ್ ಸ್ಕೂಲ್ ಆಫ್ ಬ್ಯ್ಸುಸಿನೆಸ್ಸಿನ ವಾಣಿಜ್ಯ ಪ್ರಾಧ್ಯಾಪಕ ಡಾ.ಬೇಜಾನ್ ಸಿಂಗ್ ದಾರೂವಾಲ ಅವರ ಪ್ರಕಾರ, ಪೈರೇಟಿಂಗ್ ಉದ್ಯಮದಲ್ಲಿ ಕನ್ನಡ ಅತ್ಯಂತ ಹಿಂದುಳಿದಿದ್ದು, ಡಿ.ವಿ.ಡಿ. ಪೈರೇಟಿಂಗ್ ಕೇವಲ ಒಂದು ಉದಾಹರಣೆ ಅಷ್ಟೆ. "ಕರ್ನಾಟಕ ಸರ್ಕಾರ ಡಿ.ವಿ.ಡಿ. ಪೈರೇಟಿಂಗ್ ಮಾತ್ರ ಪ್ರೋತ್ಸಾಹಿಸಿದರೆ ಸಾಲದು. ಇಡೀ ಪೈರೇಟಿಂಗ್ ಉದ್ಯಮವನ್ನೇ ಪ್ರೋತ್ಸಾಹಿಸಬೇಕು. ಇದು ಚಲನ ಚಿತ್ರಕ್ಕೆ ಮಾತ್ರ ಸಂಬಂಧಿಸಿದ ವಿಷಯ ಅಲ್ಲ. ಇಡೀ ವ್ಯವಸ್ಥೆಯ ವಿಚಾರ. ಉದಾಹರಣೆಗೆ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಜೆ.ಕೆ.ರೌಲಿಂಗ್ಳ ಹ್ಯಾರಿ ಪಾಟರ್ ಪುಸ್ತಕದ ನಕಲಿ ಕಾಪಿಗಳು ಮಾರಾಟವಾಗುತ್ತಿವೆ. ಆದರೆ, ಎಸ್.ಎಲ್.ಭೈರಪ್ಪನವರ ಆವರಣದ ನಕಲಿ ಕಾಪಿಗಳು ಎಲ್ಲೂ ಕಾಣಸಿಗುವುದೇ ಇಲ್ಲ." ಎಂದ ಡಾ.ದಾರೂವಾಲಾ "ಕರ್ನಾಟಕ ಸರ್ಕಾರ ಡಿ.ವಿ.ಡಿ.ಗೆ ಪ್ರೋತ್ಸಾಹಧನ ನೀಡುವ ವಿಚಾರ ಬಿಟ್ಟು, ಇಡೀ ಪೈರೇಟಿಂಗ್ ಉದ್ಯಮವನ್ನೇ ಅಭಿವೃದ್ದಿ ಪಡಿಸುವ ಬಗೆಗೆ ಗಮನ ಹರಿಸಬೇಕು. ಈ ಉದ್ಯಮದಲ್ಲಿ ಅಪಾರ ಅನುಭವ ಮತ್ತು ಯಶಸ್ಸು ಪಡೆದಿರುವ ಚೈನಾ ದೇಶದ ನಿಪುಣರನ್ನು ಸಂಪರ್ಕಿಸಿ ಪೈರೇಟಿಂಗ್ ಟೆಕ್ನಾಲಜಿ ಪಾರ್ಕ್ ಸ್ಥಾಪಿಸುವುದು ಒಳಿತು" ಎಂದರು.
ಭಾರತದಲ್ಲಿ ಶೇ.೪೦ರಷ್ಟು ಜನರು ನಿರಕ್ಷರಸ್ತರಿದ್ದು, ಒಂದು ಅಂದಾಜಿನ ಪ್ರಕಾರ ಶೇ.೨೫ರಷ್ಟು ಮಂದಿ ಯಾವುದೇ ಒಳ ಉಡುಗೆ ತೊಡುವುದಿಲ್ಲವೆಂದು ತಿಳಿದು ಬಂದಿದೆ. ಅಕ್ಷರಸ್ತರ ಸಂಖ್ಯೆಯನ್ನು ಹೆಚ್ಚು ಮಾಡಲು ಸೂಕ್ತ ಪುಸ್ತಕಗಳ ಅವಶ್ಯಕತೆಯಿದ್ದು ಈ ಪುಸ್ತಕಗಳ ಮುದ್ರಣಕ್ಕೆ ಹೆಚ್ಚು ಹೆಚ್ಚು ಕಾಗದವನ್ನು ತಯಾರಿಸುವ ಅನಿವಾರ್ಯತೆ ಎದುರಾಗಿದೆ.